ಪಂಚಭೂತ

ಈ ಭೂಮಿ ನಮ್ಮದು ಆಕಾಶ ನಮ್ಮದು
ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು ||

ನಮ್ಮ ಭೂಮಿ ಗರ್ಭದಲ್ಲಿ
ಭ್ರೂಣಗಳ ಕೊಂದರು
ಆಕಾಶದ ಅನಂತವನ್ನು
ಆಪೋಶನೆಗೊಂಡರು
ಬೀಸೊ ಗಾಳಿ ಎದುರು ನಿಂತು
ಗಾಳ ಹಾಕಿ ಹಿಡಿದರು
ಕುಡಿವ ನೀರ ಕಣ್ಣ ಕಳೆದು
ಕುರುಡಾಗಿಸಿಬಿಟ್ಟರು
ಬೆಂಕಿ ಹಿಡಿದು ಎಗರಿ ಕುಣಿದು
ಕನಸುಗಳ ಸುಟ್ಟರು ||

ಬಿರುಕು ಬಿಟ್ಟ ಭೂಮಿಯಲ್ಲಿ
ನಿಟ್ಟುಸಿರು ನರಳಿದೆ
ಆಕಾಶದ ಅಳುವಿನಲ್ಲಿ
ಇತಿಹಾಸದ ಕೊರಗಿದೆ
ಗಾಳದಲ್ಲಿ ಸಿಲುಕಿ ನಿಂತ
ಗಾಳಿ ಗೂಳಿ ಆಗಲಿದೆ
ನೀರು ಹರಿದು ನೆಲದ ತುಂಬ
ಕನಸ ಕಣ್ಣು ಮೂಡಲಿದೆ
ಬೆಂಕಿ ಸುತ್ತ ಸೆಟೆದು ನಿಂತು
ಕನಸುಗಳ ಕಾಯಲಿದೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿಡ್ನಿ ಕತೆ
Next post ಮರದ ಆಶ್ವಾಸನೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys